’ಮೊಗ್ಗಿನ ಮನಸು’ ಚಿತ್ರದ್ದೊಂದು ದೃಶ್ಯ..
ಅದೊಂದು ಮಂಗಳೂರಿನ ಕಾಲೇಜು. ಮೊದಲನೇ ದಿನ ಪಿ.ಯು.ಸಿ ಕ್ಲಾಸಿನಲ್ಲಿ ಅದ್ಯಾಪಕರು ಇಂಗ್ಲೀಷಿನಲ್ಲಿ ಒಂದು ಜೋಕು ಹೇಳುತ್ತಾರೆ. ಅವರು ಹೇಳಿ ಮುಗಿಸಿದಾಕ್ಷಣವೇ ಎಲ್ಲರೂ ನಕ್ಕರೆ ಒಂದು ಹುಡುಗಿ ಮಾತ್ರ ಎದ್ದು ನಿಂತು ಅಳತೊಡಗುತ್ತಾಳೆ. ಯಾಕಮ್ಮಾ ಅಳುತ್ತಿದ್ದೀಯ ಅಂತ ಕೇಳಿದರೆ ನಾನು ಕನ್ನಡ ಮೀಡಿಯಂ ನಲ್ಲಿ ಓದಿದ್ದು ಸಾರ್, ನೀವು ಹೇಳಿದ್ದು ನಂಗೇನೂ ತಿಳೀಲಿಲ್ಲ ಅನ್ನುತ್ತಾಳೆ. ಇಡೀ ಕ್ಲಾಸಿಗೇ ಕ್ಲಾಸೇ ನಗುತ್ತದೆ. ಮೇಸ್ಟ್ರು ಎಲ್ಲರನ್ನೂ ಬೈದು ಸುಮ್ಮನಾಗಿಸುತ್ತಾರೆ.
ಆ ಚಿತ್ರದ ನಿರ್ದೇಶಕ ಪುಣ್ಯಾತ್ಮನಿಗೆ ಅದ್ಯಾರು ಹೇಳಿದರು ಕನ್ನಡ ಮೀಡಿಯಂ ನಲ್ಲಿ ಓದಿದವರಿಗೆ ಇಂಗ್ಲೀಷು ತಿಳಿಯುವುದಿಲ್ಲವೆಂದು? ಅದೂ ಕೂಡ ಅಲ್ಲಿ ಹೇಳಿದ ಒಂದು ಕಾಂಜೀ ಪೀಂಜಿ ಜೋಕು ! ಕನ್ನಡ ಮೀಡಿಯಂನಲ್ಲಿ ಓದಿದ್ದರೂ ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿತಿಯೇ ಇರುತ್ತೇವೆ. ಅದೂ ೧೦ ಕ್ಲಾಸಿನ ವರೆಗೆ ಓದಿದ ಒಬ್ಬರಿಗೆ ೨ ವಾಕ್ಯ ಇಂಗ್ಲೀಷು ಅರ್ಥವಾಗಲಿಲ್ಲವೆಂದರೆ ಅದು ಅವರ ತೊಂದರೆಯೇ ಹೊರತು ಮಾಧ್ಯಮದ್ದಲ್ಲ.
ನಂತರ ಆ ಮೇಸ್ಟ್ರು, ಕನ್ನಡ ಮೀಡಿಯಂ ನಲ್ಲಿ ಓದಿದೋರೆಲ್ಲ ದಡ್ಡರು ಇಂಗ್ಲೀಷ್ ಮೀಡಿಯಂ ನಲ್ಲಿ ಓದಿದೋರೆಲ್ಲ ಬುದ್ಧಿವಂತರು ಅನ್ಕೋಬೇಡಿ. ಭಾಷೆಗಿಂತ ಪ್ರತಿಭೆ ಮುಖ್ಯ. ಫ್ರಾನ್ಸ್, ಜಪಾನು, ರಷ್ಯ ಎಲ್ಲರೂ ಅವರವರ ಭಾಷೆಯಲ್ಲೇ ಎಲ್ಲವನ್ನು ಮಾಡ್ಕೊಂಡಿದಾರೆ, ಮುಂದುವರೆದಿದಾರೆ, ನಾನೂ ಕೂಡ ಕನ್ನಡ ಮೀಡಿಯಂ ನಲ್ಲೇ ಓದಿದ್ದು. anybody dare to challenge me here? ಅಂತ ಅರಚುತ್ತಾರೇನೋ ನಿಜ. ಆದರೆ ಅಷ್ಟರಲ್ಲೇ ಕನ್ನಡ ಮೀಡಿಯಂನಲ್ಲಿ ಓದಿದೋರು ಹೆಡ್ಡರು ಎಂಬ ಭಾವನೆ ನೋಡುಗರಲ್ಲಿ ಬಂದಿರುತ್ತದೆ.
ಇದ್ಯಾಕೆ ಕನ್ನಡ ಮಾಧ್ಯಮ ಕಲಿಕೆಯನ್ನು ತೊಡೆದು ಹಾಕಲು ಚಿತ್ರರಂಗದಿಂದ ಹಿಡಿದು ಹೈಕೋರ್ಟ್ ವರೆಗೆ ಎಲ್ಲರೂ ಟೊಂಕ ಕಟ್ಟಿ ನಿಂತಿದ್ದಾರೋ ನಾಕಾಣೆ!
***************************
ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲ ಕಂಪನಿಗಳೂ ಕಡ್ಡಾಯ ರಜೆ ಕೊಡಲೇಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸುವ ಸ್ಥಿತಿ ಇದೆ ಇವತ್ತು ಭಾರತದಲ್ಲಿ ಅಂತ ಕೊರಗುತ್ತಿರುವಾಗಲೇ ಹೀಗೆಲ್ಲಾ ಸುತ್ತೋಲೆ ಹೊರಡಿಸಿ ಸರ್ಕಾರ ನಮ್ಮ ಸ್ವಾತಂತ್ರ್ಯ ಹರಣ ಮಾಡಿದರೆ ನಾವು ಬೇರೆ ಜಾಗ ನೋಡ್ಕೋತೀವಿ, ಆಮೇಲೆ ನಿಮ್ಮ ಜನರಿಗೇ ಕೆಲಸ ಕೊಡೋರು ಯಾರೂ ಇರೋಲ್ಲ ಎಂದು ಐ.ಟಿ.ಕಂಪನಿಗಳು ಬುಸುಗುಟ್ಟಿದವಂತೆ.
ಆಗಸ್ಟ ೧೫ಕ್ಕೆ ರಜ ಕೊಡಬೇಕೆಂದು ಕೆಲವು ಸಾಫ್ಟ್ ವೇರ್ ಕಂಪನಿಗಳಲ್ಲಿ ೧೪ ರಂದೇ ಸ್ವಾತಂತ್ರ್ಯೋತ್ಸವವನ್ನು ಜೋರಾಗಿ ಆಚರಿಸುತ್ತಿದ್ದುದನ್ನು ಕಂಡು ಇವತ್ತು ಪಾಕಿಸ್ತಾನದ ಸ್ವಾತ್ರಂತ್ರ್ಯೋತ್ಸವವಲ್ವಾ ಎಂದು ತಲೆಕೆರೆದುಕೊಂಡವರು ಹಾಗೆಯೇ ತಲೆಕೆರೆದುಕೊಳ್ಳುತ್ತಾ ಉಳಿದಿರುವಾಗಲೇ ಮೆಜೆಸ್ಟಿಕ್ಕು ರಶ್ಶಾಗಿತ್ತು.
*******************************
ಮೊನ್ನೆ ಮೊನ್ನೆ ಬೆಂಗಳೂರು ಹತ್ತಿರ ರೇವ್ ಪಾರ್ಟಿ ನೆಡೆದು ಅವರು ಸಿಕ್ಕಿಬಿದ್ದು ಟಿ.ವಿ.ಯಲ್ಲೆಲ್ಲಾ ಬಂತು. ಅದರಲ್ಲಿ ಹುಡುಗಿಯರೂ ಇದ್ದರು. ಅವರು ಟಿ.ವಿ.ಕ್ಯಾಮೆರಾದ ಮುಂದೆ ಅಳುತ್ತಿದ್ದರು ಅರಚುತ್ತಿದ್ದರು. ಇದನ್ನು ನೋಡಿ ಕರುಳು ಮಿಡಿದ ಒಬ್ಬ ಪತ್ರಿಕೆಗೆ ಪತ್ರ ಬರೆದಿದ್ದ. ಹೆಣ್ಣು ಮಕ್ಕಳು ಕೈಮುಗಿದು ತಮ್ಮದೇನೂ ತಪ್ಪಿಲ್ಲ(!) ಎಂದು ಅಳುತ್ತಿದ್ದರೂ ಅವರನ್ನು ಹಿಡಿದು ಹಿಡಿದು ತೋರಿಸಿದ ರಕ್ಷಣಾ ವೇದಿಕೆಯ ಜನರದ್ದೇ ತಪ್ಪು. ಇದು ಹೆಣ್ಣಿಗೆ ಮಾಡಿದ ಅವಮಾನ ಎಂಬಂತೆ !. ಜ್ಞಾನಪೀಠದ ಸಪೋರ್ಟು ಸಿಕ್ಕಿ ಅಲ್ಲಿ ಪೇಜ್ 3 ಜನರೆಲ್ಲಾ ಹೊಸ ಹುರುಪಿನಿಂದ ಮೇಲೆದ್ದುದನ್ನು ಕಂಡೇ ದಂಗಾಗಿದ್ದ ಮನೆಮಂದಿ ಈ ಪತ್ರವನ್ನೂ ಓದಿ ಹಾಗಿದ್ದರೆ ರೇವ್ ಪಾರ್ಟಿಯಲ್ಲಿ ಗಾಂಜಾ ಸೇದಿ, ಹೆಂಡ ಕುಡಿದು, ಬೆತ್ತಲೆ ಕುಣಿದರೆ ತಪ್ಪಲ್ವಾ, ಹೆಣ್ಣಿಗೆ ಅವಮಾನವಾದಂತಾಗಲಿಲ್ವಾ ಎಂದು ಪಿಳಿಪಿಳಿ ಕಣ್ಣು ಬಿಟ್ಟರು.
******************************
ಕೆಲವರು ಪದ್ಮಪ್ರಿಯಾ ಬಗ್ಗೆ ಬರೆದರು, ಕೆಲವರು ನೈಪಾಲರ ಹೆಂಡತಿಯ ಬಗ್ಗೆ ಬರೆದರು. ಚಿಯರ್ ಗರ್ಲ್ಸ್ ಬಗ್ಗೆಯೂ ಬರೆಯುತ್ತಾರೆನೋ ಅಂತ ಕಾದೆ. ಬರೆಯಲಿಲ್ಲ. ಅದೇ ಬೇರೆ ಇದೇ ಬೇರೆ ನೀನಿನ್ನೂ ಚಿಕ್ಕವನು ಸುಮ್ಮನಿರು ಅಂದರು. ಹೌದು ಅನ್ನಿಸಿತು. ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಬೇಕು ಎಂದರು. ಹೌದು ಅನ್ನಿಸಿತು. ಆವಾಗ ಸ್ತ್ರೀ ಶೋಷಣೆ ನಿಂತಂತೆ ಅಂದರು, ಹೌದು ಅನ್ನಿಸಿತು. ಮೈ ತೋರಿಸಿ, ಬಳಸಿ ಹಣಗಳಿಸುವುದೂ ಆರ್ಥಿಕ ಸ್ವಾತಂತ್ರ್ಯಕ್ಕೆ ಒಂದು ದಾರಿ ಎಂದರು ಕೆಲವರು. ಹೌದಾ! ಅನ್ನಿಸಿತು. ಆಮೇಲೆ ಇದ್ಯಾಕೋ ಈ ಸಂವೇದನೆಗಳೆಲ್ಲಾ ಗಡ್ಡ ಬಿಟ್ಟವರಿಗೇ ಸರಿ ಎನಿಸಿ ಬೆಳಗ್ಗೆಯಷ್ಟೆ ಶೇವ್ ಮಾಡಿದ ನುಣುಪಾದ ಕೆನ್ನೆಯನ್ನು ಸವರಿಕೊಂಡೆ.
*******************************
ಮನೆ ಹತ್ತಿರ ಪಾರ್ಟಿಯೊಂದು ಜೋರಾಗಿ ನೆಡೆಯುತ್ತಿತ್ತು. ಅಭಿನಂದನಾ ಪಾರ್ಟಿಯಂತೆ. ಏರಿಯಾದ ಜನರನ್ನೆಲ್ಲಾ ಕರೆದಿದ್ದಾರಂತೆ. ಯಾಕಂತೆ ಪಾರ್ಟಿ ಅಂತ ಕೇಳಿದರೆ ಅವರ ಮಗನಿಗೆ ಅದೇನೋ ಸಿಕ್ಕಿದೆಯಂತೆ ಅಂದಿತು ಪಕ್ಕದ ಮನೆ ಅಜ್ಜಿ. ಪರಮವೀರಚಕ್ರವೋ, ರಾಷ್ಟಪತಿ ಪದಕವೋ, ಇನ್ನೇನೋ ಪ್ರಶಸ್ತಿಯೋ ಇರಬಹುದಾ, ವಿಶ್ ಮಾಡೋಣ ಅಂತ ಕುತೂಹಲದಿಂದ ನೋಡಿದರೆ ಪಾರ್ಟಿ ಇದ್ದದ್ದು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಸಾಫ್ಟ್ ವೇರ್ ಕೆಲಸ ಸಿಕ್ಕಿದ್ದಕ್ಕೆ!! ಸ್ಯಾಲರಿ ಪ್ಯಾಕೇಜ್ ಬಗ್ಗೆ ಆಮೇಲೆ ಕೇಳೋಣ ಅಂತ ಸುಮ್ಮನಾದೆ.
*********************************
ಶಶಾಂಕ್ ಅಂಥ riskನ್ನು comfortable ಅಗಿ avoid ಮಾಡಿಕೊಂಡು ಮುನ್ನಡೆಯುತ್ತಾರೆ. ಅಂಥ possessiveness ಹುಡುಗಿಯರನ್ನು ಹೇಗೆ ಹಿಂಸೆ ಮಾಡುತ್ತದೆ ಎಂಬುದನ್ನು ತುಂಬ crisp ಆಗಿ ಶಶಾಂಕ್ ಹೇಳಿ ಮುಗಿಸುತ್ತಾರೆ. ಸಿನೆಮಾದ ಪ್ರತಿ ಪಾತ್ರವೂ ತನ್ನದೇ ಆದ ರೀತಿಯಲ್ಲಿ unfold ಆಗಿ, ಅತ್ಯಂತ Logical ಆಗಿ conclude ಆಗುತ್ತದೆ.
ಈ ಮೇಲಿನ ವಾಕ್ಯಗಳು ಬೆಂಗಳೂರಿನ ಯಾವುದೋ ಕಾನ್ವೆಂಟ್ ಮಕ್ಕಳು ಬರೆದದ್ದೋ ಅಥವಾ ಎಪ್ಫೆಮ್ ರೇಡಿಯೋದಲ್ಲಿ ಬಂದಿದ್ದೋ ಅಲ್ಲ.ಅದು ಕನ್ನಡದ ’ದೈತ್ಯ’ ಬರಹಗಾರರೊಬ್ಬರ ಬರಹದ ಉದಾಹರಣೆಗಳು. ಏನು ಮಾಡೋದು, ಅವರು ಏನು ಬರೆದರೂ ಕನ್ನಡಿಗರು ಒಪ್ಪಿಕೊಳ್ಳಲೇಬೇಕು. ಮತ್ತು ಹೀಗೆ ಬರೆಯುವವರೂ ಕೂಡ ಕನ್ನಡ ಲೇಖಕರು ಎಂದು ಒಪ್ಪಿಕೊಂಡು ಸುಮ್ಮನಿರಬೇಕು.
***********************************
ಅದೊಂದು ಮಂಗಳೂರಿನ ಕಾಲೇಜು. ಮೊದಲನೇ ದಿನ ಪಿ.ಯು.ಸಿ ಕ್ಲಾಸಿನಲ್ಲಿ ಅದ್ಯಾಪಕರು ಇಂಗ್ಲೀಷಿನಲ್ಲಿ ಒಂದು ಜೋಕು ಹೇಳುತ್ತಾರೆ. ಅವರು ಹೇಳಿ ಮುಗಿಸಿದಾಕ್ಷಣವೇ ಎಲ್ಲರೂ ನಕ್ಕರೆ ಒಂದು ಹುಡುಗಿ ಮಾತ್ರ ಎದ್ದು ನಿಂತು ಅಳತೊಡಗುತ್ತಾಳೆ. ಯಾಕಮ್ಮಾ ಅಳುತ್ತಿದ್ದೀಯ ಅಂತ ಕೇಳಿದರೆ ನಾನು ಕನ್ನಡ ಮೀಡಿಯಂ ನಲ್ಲಿ ಓದಿದ್ದು ಸಾರ್, ನೀವು ಹೇಳಿದ್ದು ನಂಗೇನೂ ತಿಳೀಲಿಲ್ಲ ಅನ್ನುತ್ತಾಳೆ. ಇಡೀ ಕ್ಲಾಸಿಗೇ ಕ್ಲಾಸೇ ನಗುತ್ತದೆ. ಮೇಸ್ಟ್ರು ಎಲ್ಲರನ್ನೂ ಬೈದು ಸುಮ್ಮನಾಗಿಸುತ್ತಾರೆ.
ಆ ಚಿತ್ರದ ನಿರ್ದೇಶಕ ಪುಣ್ಯಾತ್ಮನಿಗೆ ಅದ್ಯಾರು ಹೇಳಿದರು ಕನ್ನಡ ಮೀಡಿಯಂ ನಲ್ಲಿ ಓದಿದವರಿಗೆ ಇಂಗ್ಲೀಷು ತಿಳಿಯುವುದಿಲ್ಲವೆಂದು? ಅದೂ ಕೂಡ ಅಲ್ಲಿ ಹೇಳಿದ ಒಂದು ಕಾಂಜೀ ಪೀಂಜಿ ಜೋಕು ! ಕನ್ನಡ ಮೀಡಿಯಂನಲ್ಲಿ ಓದಿದ್ದರೂ ಇಂಗ್ಲೀಷನ್ನು ಒಂದು ಭಾಷೆಯಾಗಿ ಕಲಿತಿಯೇ ಇರುತ್ತೇವೆ. ಅದೂ ೧೦ ಕ್ಲಾಸಿನ ವರೆಗೆ ಓದಿದ ಒಬ್ಬರಿಗೆ ೨ ವಾಕ್ಯ ಇಂಗ್ಲೀಷು ಅರ್ಥವಾಗಲಿಲ್ಲವೆಂದರೆ ಅದು ಅವರ ತೊಂದರೆಯೇ ಹೊರತು ಮಾಧ್ಯಮದ್ದಲ್ಲ.
ನಂತರ ಆ ಮೇಸ್ಟ್ರು, ಕನ್ನಡ ಮೀಡಿಯಂ ನಲ್ಲಿ ಓದಿದೋರೆಲ್ಲ ದಡ್ಡರು ಇಂಗ್ಲೀಷ್ ಮೀಡಿಯಂ ನಲ್ಲಿ ಓದಿದೋರೆಲ್ಲ ಬುದ್ಧಿವಂತರು ಅನ್ಕೋಬೇಡಿ. ಭಾಷೆಗಿಂತ ಪ್ರತಿಭೆ ಮುಖ್ಯ. ಫ್ರಾನ್ಸ್, ಜಪಾನು, ರಷ್ಯ ಎಲ್ಲರೂ ಅವರವರ ಭಾಷೆಯಲ್ಲೇ ಎಲ್ಲವನ್ನು ಮಾಡ್ಕೊಂಡಿದಾರೆ, ಮುಂದುವರೆದಿದಾರೆ, ನಾನೂ ಕೂಡ ಕನ್ನಡ ಮೀಡಿಯಂ ನಲ್ಲೇ ಓದಿದ್ದು. anybody dare to challenge me here? ಅಂತ ಅರಚುತ್ತಾರೇನೋ ನಿಜ. ಆದರೆ ಅಷ್ಟರಲ್ಲೇ ಕನ್ನಡ ಮೀಡಿಯಂನಲ್ಲಿ ಓದಿದೋರು ಹೆಡ್ಡರು ಎಂಬ ಭಾವನೆ ನೋಡುಗರಲ್ಲಿ ಬಂದಿರುತ್ತದೆ.
ಇದ್ಯಾಕೆ ಕನ್ನಡ ಮಾಧ್ಯಮ ಕಲಿಕೆಯನ್ನು ತೊಡೆದು ಹಾಕಲು ಚಿತ್ರರಂಗದಿಂದ ಹಿಡಿದು ಹೈಕೋರ್ಟ್ ವರೆಗೆ ಎಲ್ಲರೂ ಟೊಂಕ ಕಟ್ಟಿ ನಿಂತಿದ್ದಾರೋ ನಾಕಾಣೆ!
***************************
ಸ್ವಾತಂತ್ರ್ಯ ದಿನಾಚರಣೆಗೆ ಎಲ್ಲ ಕಂಪನಿಗಳೂ ಕಡ್ಡಾಯ ರಜೆ ಕೊಡಲೇಬೇಕೆಂದು ಸರ್ಕಾರ ಸುತ್ತೋಲೆ ಹೊರಡಿಸುವ ಸ್ಥಿತಿ ಇದೆ ಇವತ್ತು ಭಾರತದಲ್ಲಿ ಅಂತ ಕೊರಗುತ್ತಿರುವಾಗಲೇ ಹೀಗೆಲ್ಲಾ ಸುತ್ತೋಲೆ ಹೊರಡಿಸಿ ಸರ್ಕಾರ ನಮ್ಮ ಸ್ವಾತಂತ್ರ್ಯ ಹರಣ ಮಾಡಿದರೆ ನಾವು ಬೇರೆ ಜಾಗ ನೋಡ್ಕೋತೀವಿ, ಆಮೇಲೆ ನಿಮ್ಮ ಜನರಿಗೇ ಕೆಲಸ ಕೊಡೋರು ಯಾರೂ ಇರೋಲ್ಲ ಎಂದು ಐ.ಟಿ.ಕಂಪನಿಗಳು ಬುಸುಗುಟ್ಟಿದವಂತೆ.
ಆಗಸ್ಟ ೧೫ಕ್ಕೆ ರಜ ಕೊಡಬೇಕೆಂದು ಕೆಲವು ಸಾಫ್ಟ್ ವೇರ್ ಕಂಪನಿಗಳಲ್ಲಿ ೧೪ ರಂದೇ ಸ್ವಾತಂತ್ರ್ಯೋತ್ಸವವನ್ನು ಜೋರಾಗಿ ಆಚರಿಸುತ್ತಿದ್ದುದನ್ನು ಕಂಡು ಇವತ್ತು ಪಾಕಿಸ್ತಾನದ ಸ್ವಾತ್ರಂತ್ರ್ಯೋತ್ಸವವಲ್ವಾ ಎಂದು ತಲೆಕೆರೆದುಕೊಂಡವರು ಹಾಗೆಯೇ ತಲೆಕೆರೆದುಕೊಳ್ಳುತ್ತಾ ಉಳಿದಿರುವಾಗಲೇ ಮೆಜೆಸ್ಟಿಕ್ಕು ರಶ್ಶಾಗಿತ್ತು.
*******************************
ಮೊನ್ನೆ ಮೊನ್ನೆ ಬೆಂಗಳೂರು ಹತ್ತಿರ ರೇವ್ ಪಾರ್ಟಿ ನೆಡೆದು ಅವರು ಸಿಕ್ಕಿಬಿದ್ದು ಟಿ.ವಿ.ಯಲ್ಲೆಲ್ಲಾ ಬಂತು. ಅದರಲ್ಲಿ ಹುಡುಗಿಯರೂ ಇದ್ದರು. ಅವರು ಟಿ.ವಿ.ಕ್ಯಾಮೆರಾದ ಮುಂದೆ ಅಳುತ್ತಿದ್ದರು ಅರಚುತ್ತಿದ್ದರು. ಇದನ್ನು ನೋಡಿ ಕರುಳು ಮಿಡಿದ ಒಬ್ಬ ಪತ್ರಿಕೆಗೆ ಪತ್ರ ಬರೆದಿದ್ದ. ಹೆಣ್ಣು ಮಕ್ಕಳು ಕೈಮುಗಿದು ತಮ್ಮದೇನೂ ತಪ್ಪಿಲ್ಲ(!) ಎಂದು ಅಳುತ್ತಿದ್ದರೂ ಅವರನ್ನು ಹಿಡಿದು ಹಿಡಿದು ತೋರಿಸಿದ ರಕ್ಷಣಾ ವೇದಿಕೆಯ ಜನರದ್ದೇ ತಪ್ಪು. ಇದು ಹೆಣ್ಣಿಗೆ ಮಾಡಿದ ಅವಮಾನ ಎಂಬಂತೆ !. ಜ್ಞಾನಪೀಠದ ಸಪೋರ್ಟು ಸಿಕ್ಕಿ ಅಲ್ಲಿ ಪೇಜ್ 3 ಜನರೆಲ್ಲಾ ಹೊಸ ಹುರುಪಿನಿಂದ ಮೇಲೆದ್ದುದನ್ನು ಕಂಡೇ ದಂಗಾಗಿದ್ದ ಮನೆಮಂದಿ ಈ ಪತ್ರವನ್ನೂ ಓದಿ ಹಾಗಿದ್ದರೆ ರೇವ್ ಪಾರ್ಟಿಯಲ್ಲಿ ಗಾಂಜಾ ಸೇದಿ, ಹೆಂಡ ಕುಡಿದು, ಬೆತ್ತಲೆ ಕುಣಿದರೆ ತಪ್ಪಲ್ವಾ, ಹೆಣ್ಣಿಗೆ ಅವಮಾನವಾದಂತಾಗಲಿಲ್ವಾ ಎಂದು ಪಿಳಿಪಿಳಿ ಕಣ್ಣು ಬಿಟ್ಟರು.
******************************
ಕೆಲವರು ಪದ್ಮಪ್ರಿಯಾ ಬಗ್ಗೆ ಬರೆದರು, ಕೆಲವರು ನೈಪಾಲರ ಹೆಂಡತಿಯ ಬಗ್ಗೆ ಬರೆದರು. ಚಿಯರ್ ಗರ್ಲ್ಸ್ ಬಗ್ಗೆಯೂ ಬರೆಯುತ್ತಾರೆನೋ ಅಂತ ಕಾದೆ. ಬರೆಯಲಿಲ್ಲ. ಅದೇ ಬೇರೆ ಇದೇ ಬೇರೆ ನೀನಿನ್ನೂ ಚಿಕ್ಕವನು ಸುಮ್ಮನಿರು ಅಂದರು. ಹೌದು ಅನ್ನಿಸಿತು. ಹೆಣ್ಣಿಗೆ ಆರ್ಥಿಕ ಸ್ವಾತಂತ್ರ್ಯ ಬೇಕು ಎಂದರು. ಹೌದು ಅನ್ನಿಸಿತು. ಆವಾಗ ಸ್ತ್ರೀ ಶೋಷಣೆ ನಿಂತಂತೆ ಅಂದರು, ಹೌದು ಅನ್ನಿಸಿತು. ಮೈ ತೋರಿಸಿ, ಬಳಸಿ ಹಣಗಳಿಸುವುದೂ ಆರ್ಥಿಕ ಸ್ವಾತಂತ್ರ್ಯಕ್ಕೆ ಒಂದು ದಾರಿ ಎಂದರು ಕೆಲವರು. ಹೌದಾ! ಅನ್ನಿಸಿತು. ಆಮೇಲೆ ಇದ್ಯಾಕೋ ಈ ಸಂವೇದನೆಗಳೆಲ್ಲಾ ಗಡ್ಡ ಬಿಟ್ಟವರಿಗೇ ಸರಿ ಎನಿಸಿ ಬೆಳಗ್ಗೆಯಷ್ಟೆ ಶೇವ್ ಮಾಡಿದ ನುಣುಪಾದ ಕೆನ್ನೆಯನ್ನು ಸವರಿಕೊಂಡೆ.
*******************************
ಮನೆ ಹತ್ತಿರ ಪಾರ್ಟಿಯೊಂದು ಜೋರಾಗಿ ನೆಡೆಯುತ್ತಿತ್ತು. ಅಭಿನಂದನಾ ಪಾರ್ಟಿಯಂತೆ. ಏರಿಯಾದ ಜನರನ್ನೆಲ್ಲಾ ಕರೆದಿದ್ದಾರಂತೆ. ಯಾಕಂತೆ ಪಾರ್ಟಿ ಅಂತ ಕೇಳಿದರೆ ಅವರ ಮಗನಿಗೆ ಅದೇನೋ ಸಿಕ್ಕಿದೆಯಂತೆ ಅಂದಿತು ಪಕ್ಕದ ಮನೆ ಅಜ್ಜಿ. ಪರಮವೀರಚಕ್ರವೋ, ರಾಷ್ಟಪತಿ ಪದಕವೋ, ಇನ್ನೇನೋ ಪ್ರಶಸ್ತಿಯೋ ಇರಬಹುದಾ, ವಿಶ್ ಮಾಡೋಣ ಅಂತ ಕುತೂಹಲದಿಂದ ನೋಡಿದರೆ ಪಾರ್ಟಿ ಇದ್ದದ್ದು ಕ್ಯಾಂಪಸ್ ಸೆಲೆಕ್ಷನ್ ನಲ್ಲಿ ಸಾಫ್ಟ್ ವೇರ್ ಕೆಲಸ ಸಿಕ್ಕಿದ್ದಕ್ಕೆ!! ಸ್ಯಾಲರಿ ಪ್ಯಾಕೇಜ್ ಬಗ್ಗೆ ಆಮೇಲೆ ಕೇಳೋಣ ಅಂತ ಸುಮ್ಮನಾದೆ.
*********************************
ಶಶಾಂಕ್ ಅಂಥ riskನ್ನು comfortable ಅಗಿ avoid ಮಾಡಿಕೊಂಡು ಮುನ್ನಡೆಯುತ್ತಾರೆ. ಅಂಥ possessiveness ಹುಡುಗಿಯರನ್ನು ಹೇಗೆ ಹಿಂಸೆ ಮಾಡುತ್ತದೆ ಎಂಬುದನ್ನು ತುಂಬ crisp ಆಗಿ ಶಶಾಂಕ್ ಹೇಳಿ ಮುಗಿಸುತ್ತಾರೆ. ಸಿನೆಮಾದ ಪ್ರತಿ ಪಾತ್ರವೂ ತನ್ನದೇ ಆದ ರೀತಿಯಲ್ಲಿ unfold ಆಗಿ, ಅತ್ಯಂತ Logical ಆಗಿ conclude ಆಗುತ್ತದೆ.
ಈ ಮೇಲಿನ ವಾಕ್ಯಗಳು ಬೆಂಗಳೂರಿನ ಯಾವುದೋ ಕಾನ್ವೆಂಟ್ ಮಕ್ಕಳು ಬರೆದದ್ದೋ ಅಥವಾ ಎಪ್ಫೆಮ್ ರೇಡಿಯೋದಲ್ಲಿ ಬಂದಿದ್ದೋ ಅಲ್ಲ.ಅದು ಕನ್ನಡದ ’ದೈತ್ಯ’ ಬರಹಗಾರರೊಬ್ಬರ ಬರಹದ ಉದಾಹರಣೆಗಳು. ಏನು ಮಾಡೋದು, ಅವರು ಏನು ಬರೆದರೂ ಕನ್ನಡಿಗರು ಒಪ್ಪಿಕೊಳ್ಳಲೇಬೇಕು. ಮತ್ತು ಹೀಗೆ ಬರೆಯುವವರೂ ಕೂಡ ಕನ್ನಡ ಲೇಖಕರು ಎಂದು ಒಪ್ಪಿಕೊಂಡು ಸುಮ್ಮನಿರಬೇಕು.
***********************************